Home | ದ.ಕ.ಜಿಲ್ಲಾ ವಾರ್ತೆ | ಮಂಗಳೂರು: ಖಾಝಿ ಮೃತ್ಯು ಪ್ರಕರಣ: ಇಂದಿನಿಂದ ಕ್ರೈಂ ಬ್ರಾಂಚ್ ತನಿಖೆ

ಮಂಗಳೂರು: ಖಾಝಿ ಮೃತ್ಯು ಪ್ರಕರಣ: ಇಂದಿನಿಂದ ಕ್ರೈಂ ಬ್ರಾಂಚ್ ತನಿಖೆ

Font size: Decrease font Enlarge font
ಕಾಸರಗೋಡು, ಮಾ.೭: ಮಂಗಳೂರು ಖಾಝಿಯಾಗಿದ್ದ ಚೆಂಬರಿಕ ಸಿ.ಎಂ. ಅಬ್ದುಲ್ಲಾ ಮುಸ್ಲಿಯಾರ್‌ರ ಮರಣದ ಕುರಿತ ತನಿಖೆಯನ್ನು ಕ್ರೈಂ ಬ್ರಾಂಚ್ ಮಾ.೮ರಿಂದ ಆರಂಭಿಸಲಿದೆ.

ತನಿಖೆಗಾಗಿ ಕ್ರೈಂ ಬ್ರಾಂಚ್ ಐಜಿ ಆರ್. ಶ್ರಿಲೇಖಾ ನಾಳೆ ಕಾಸರಗೋಡಿಗೆ ಆಗಮಿ ಸುವರು. ಬಳಿಕ ಚೆಂಬರಿಕ ಖಾಝಿಯ ವರ ಮನೆ ಮತ್ತು ಮೃತದೇಹ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕು ವರು. ಕ್ರೈಂ ಬ್ರಾಂಚ್ ಐಜಿ ಮೇಲ್ನೋಟ ದಲ್ಲಿ ಎಸ್ಪಿ ಕೆ.ಕಮಲಾಕ್ಷನ್ ತನಿಖೆ ನಡೆಸುವರು.

ಖಾಝಿಯವರ ಮೃತದೇಹವು ಕಳೆದ ಫೆ.೧೫ರಂದು ಬೆಳಗ್ಗೆ ಚೆಂಬರಿಕ ಸಮುದ್ರ ದಲ್ಲಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಬಲಪ್ರಯೋಗದಿಂದ ಮರಣ ಸಂಭವಿಸಿರುವುದಾಗಿ ಉಲ್ಲೇಖಿಸ ಲಾಗಿತ್ತು. ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಗೆ ಸಂಘಟನೆಗಳು, ರಾಜ ಕೀಯ ಪಕ್ಷಗಳು ಒತ್ತಾಯಿಸಿದ್ದವು ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ತನಿಖೆ ಯನ್ನು ಕ್ರೈಂ ಬ್ರಾಂಚ್‌ಗೆ ವಹಿಸಿ ಆದೇಶ ನೀಡಿತ್ತು.

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org