Home | ಉ.ಕ.ಜಿಲ್ಲಾ ವಾರ್ತೆ | ಯಲ್ಲಾಪುರ | ಭಟ್ಕಳ: ಹಿಂಬದಿ ಬಾಗಿಲು ಮುರಿದು ಕಳ್ಳತನಕ್ಕೆ ಪ್ರಯತ್ನ

ಭಟ್ಕಳ: ಹಿಂಬದಿ ಬಾಗಿಲು ಮುರಿದು ಕಳ್ಳತನಕ್ಕೆ ಪ್ರಯತ್ನ

Font size: Decrease font Enlarge font

ಭಟ್ಕಳ, ಫೆಬ್ರವರಿ 28: ಇಲ್ಲಿನ ನಾಗಪ್ಪ ನಾಯ್ಕ ರಸ್ತೆಯಲ್ಲಿರುವ ಮನಯೊಂದರ ಹಿಂಬದಿ ಬಾಗಿಲು ಮುರಿದು ಒಳಕ್ಕೆ ನುಗ್ಗಿದ ಕಳ್ಳರು ಒಳಗಡೆ ಕಳುವಿಗೆ ಪ್ರಯತ್ನ ನಡೆಸುತ್ತಿರುವ ಸಂದರ್ಭದಲ್ಲಿ ಮನೆಯವರು ಎಚ್ಚರಗೊಂಡಿದ್ದರಿಂದ ಪರಾರಿಯಾದ ಘಟನೆ ನಡೆದಿದೆ.

 

ಈ ಕುರಿತು ಮನೆಯ ಮಾಲಿಕ ಸಯ್ಯದ್ ಮೊಹ್ಮದ್ ಸಯ್ಯದ್ ಅಲಿ ಬರ್ಮಾವರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಳ್ಳರು ಹಿಂಬದಿ ಬಾಗಿಲಿನಿಂದ ಒಳಕ್ಕೆ ನುಗ್ಗಿ ಕಪಾಟಿನಲ್ಲಿದ್ದ ಸಾಮಗ್ರಿಗಳನ್ನು ದೋಚಲು ಯತ್ನಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

 

Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org