Home | ಉ.ಕ.ಜಿಲ್ಲಾ ವಾರ್ತೆ | ಹಳಿಯಾಳ | ಭಟ್ಕಳ:ಓಸಿ ಆಡಿಸುತ್ತಿದ್ದವನ ಬಂಧಿಸಿ ಬಿಡುಗಡೆ

ಭಟ್ಕಳ:ಓಸಿ ಆಡಿಸುತ್ತಿದ್ದವನ ಬಂಧಿಸಿ ಬಿಡುಗಡೆ

Font size: Decrease font Enlarge font
ಭಟ್ಕಳ, ಜನವರಿ 21:ಓಸಿ ಆಡಿಸುತ್ತಿದ್ದ ವ್ಯಕ್ತಿಯೋರ್ವನನ್ನು ಮುರ್ಡೇಶ್ವರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ. ಮುರ್ಡೇಶ್ವರದ ವೆಂಕಟೇಶ ತಂದೆ ಜಟ್ಟಪ್ಪ ನಾಯ್ಕ ಎಂಬಾತನೇ ಬಂಧಿತ ವ್ಯಕ್ತಿಯಾಗಿದ್ದಾನೆ.
 
ಈತ ನಿನ್ನೆ ರಾತ್ರಿ ಮುರ್ಡೇಶ್ವರ ಮಠದ ಹಿತ್ಲುವಿಗೆ ತೆರಳುವ ದಾರಿಯಲ್ಲಿ ಓಸಿ ಬರೆಯುತ್ತಿದ್ದ ಸಂದರ್ಭದಲ್ಲಿ ಎಸೈ ಸುಂದರೇಶ ದಾಳಿ ನಡೆಸಿ ಆತನಿಂದ ೪೫೦ ರೂ ನಗದು ಹಣ ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ನಿನ್ನೆ ರಾತ್ರಿಯೇ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.





Comments (0 posted):

Post your comment comment

Please enter the code you see in the image:

  • email Email to a friend
  • print Print version
  • Plain text Plain text
Rate this article
0
Powered by SahilOnline.org